ವೀರ ಘೋಷಣೆ ವೀರ ಗರ್ಜನೆ, ಗೈಯ್ಯೇ ವಿಜೋಯೋಪಾಸನೆ
ಶಕ್ತಿ ಇಲ್ಲದೆ ಮುಕ್ತಿ ಇಲ್ಲವು, ಇದು ಚರಿತ್ರೆಯ ಬೋಧನೇ || ವೀರ ||
ಒಬ್ಬರಾಗುತ ಒಬ್ಬ ದೇವರು, ಹುಟ್ಟಿ ಬಂದರು, ಬಂದರೂ
ಸಾಧು ಪುರುಷರು ವೀರ ಪುರುಷರು, ಬಂದು ಹೋದರು, ಹೋದರೂ
ಗೊಟ್ಟು ಮನದಲಿ ಅಟ್ಟಬಿದ್ದೆವು, ನಮ್ಮಡಿಯ ಹಿಂದೆಟ್ಟೆವು
ಹೂವು ಹಣ್ಣನು ಕೊಟ್ಟು ಅವರನು, ಮುಂದೆ ಸಾಗಿಸಿ ಬಿಟ್ಟೆವು || ವೀರ ||
ಉದ್ಧರೆ ದಾತ್ಮನಾತ್ಮಾನಂದ ನಾವೇ ಪಟಿಸಿದುದಲ್ಲವೇ
ಕೋವಿ ಕತ್ತಿಯನಿಟ್ಟು, ಸುಮ್ಮನೆ ನಾವೆ ಪೂಜಿಸಿದುದಲ್ಲವೇ
ಪೂಜೆ ಏತಕೆ ಪಟಣವೇತಕೆ, ಗೈದೆವೆಂಬುದ ಬಲ್ಲೇವೇ
ಶಸ್ತ್ರ ವೇತಕೆ ಶಾಸ್ತ್ರ ವೇತಕೆ, ಎಂಬುದನು ಮರೆತಿಲ್ಲವೇ? || ವೀರ ||
ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ
ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ
ವೇದವಿದ್ದರೆ ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ
ಏನು ಸಾರ್ಥಕ, ಮನೆಯ ಜನರೇ ಮಲಗಿ ನಿದ್ರಿಸುತ್ತಿದ್ದರೆ? || ವೀರ ||
ಮಾತೃ ಭೂಮಿಯ ಮಕ್ಕಳಾದರೆ, ಈಗ ನಿದ್ರಿಸಲೋಲ್ಲಿರಿ
ಮೈಯ ರಕ್ತವು ಶುದ್ಧವಿದ್ದರೆ, ಈಗ ತೋರಿಸಬಲ್ಲಿರಿ
ಅಡಿಯ ಮುಂದಿದೇ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ
ಕಡಲನಾಳಿರೀ ನಭವನಳಿಯಿರಿ, ಯಂತ್ರ ತಂತ್ರವ ನಿರ್ಮಿಸಿ || ವೀರ ||
ವೀರ ಘೋಷಣೆ ವೀರ ಗರ್ಜನೆ, ಗೈಯ್ಯೇ ವಿಜೋಯೋಪಾಸನೆ
ಶಕ್ತಿ ಇಲ್ಲದೆ ಮುಕ್ತಿ ಇಲ್ಲವು, ಇದು ಚರಿತ್ರೆಯ ಬೋಧನೇ || ವೀರ ||
ಒಬ್ಬರಾಗುತ ಒಬ್ಬ ದೇವರು, ಹುಟ್ಟಿ ಬಂದರು, ಬಂದರೂ
ಸಾಧು ಪುರುಷರು ವೀರ ಪುರುಷರು, ಬಂದು ಹೋದರು, ಹೋದರೂ
ಗೊಟ್ಟು ಮನದಲಿ ಅಟ್ಟಬಿದ್ದೆವು, ನಮ್ಮಡಿಯ ಹಿಂದೆಟ್ಟೆವು
ಹೂವು ಹಣ್ಣನು ಕೊಟ್ಟು ಅವರನು, ಮುಂದೆ ಸಾಗಿಸಿ ಬಿಟ್ಟೆವು || ವೀರ ||
ಉದ್ಧರೆ ದಾತ್ಮನಾತ್ಮಾನಂದ ನಾವೇ ಪಟಿಸಿದುದಲ್ಲವೇ
ಕೋವಿ ಕತ್ತಿಯನಿಟ್ಟು, ಸುಮ್ಮನೆ ನಾವೆ ಪೂಜಿಸಿದುದಲ್ಲವೇ
ಪೂಜೆ ಏತಕೆ ಪಟಣವೇತಕೆ, ಗೈದೆವೆಂಬುದ ಬಲ್ಲೇವೇ
ಶಸ್ತ್ರ ವೇತಕೆ ಶಾಸ್ತ್ರ ವೇತಕೆ, ಎಂಬುದನು ಮರೆತಿಲ್ಲವೇ? || ವೀರ ||
ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ
ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ
ವೇದವಿದ್ದರೆ ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ
ಏನು ಸಾರ್ಥಕ, ಮನೆಯ ಜನರೇ ಮಲಗಿ ನಿದ್ರಿಸುತ್ತಿದ್ದರೆ? || ವೀರ ||
ಮಾತೃ ಭೂಮಿಯ ಮಕ್ಕಳಾದರೆ, ಈಗ ನಿದ್ರಿಸಲೋಲ್ಲಿರಿ
ಮೈಯ ರಕ್ತವು ಶುದ್ಧವಿದ್ದರೆ, ಈಗ ತೋರಿಸಬಲ್ಲಿರಿ
ಅಡಿಯ ಮುಂದಿದೇ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ
ಕಡಲನಾಳಿರೀ ನಭವನಳಿಯಿರಿ, ಯಂತ್ರ ತಂತ್ರವ ನಿರ್ಮಿಸಿ || ವೀರ ||
Anonymous | Oct 1 2012 - 07:14
Post new comment